ಗಾಳಿಗಂಟೆಯಲಿ ತೂರಿಬಂದ ಸವಿನಾದ,
ಮನದ ತಂತಿಯಲಿ ಮೂಡಿಸಿದೆ ಅನುರಾಗ ||
ನೀಲಿಪಟ ಆಕಾಶದ ಹಿನ್ನೆಲೆಯಲಿ,
ಬೆತ್ತಲೆ ಮರ ಬರೆದಿದೆ ಮೌನದ ಕವನ
ಕೊಂಬೆಯ ಶೂನ್ಯತೆ ಉಸಿರಾಗಿ ಹರಿಯೆ
ಗಂಟೆಯ ನಾದದೊಳು ಜೀವದ ಪ್ರತಿಧ್ವನಿ
ಎದೆಯೊಳಗೆ ಅರಿಯೆ ನಾ ಹೇಳಲಾಗದ ನೆಮ್ಮದಿ ||